Main Centers
International Centers
India
USA
Wisdom
FILTERS:
SORT BY:
ಕಾರ್ಯಕ್ಷಮತೆ ಎಂಬುದು ಯಾವಾಗಲೂ ನಿಮ್ಮ ಸುತ್ತಲಿನ ಜನರೆಡೆಗಿನ ಪ್ರೀತಿ ಮತ್ತು ಕಾಳಜಿಯಿಂದ ಮೂಡಬೇಕು, ಯಾಂತ್ರಿಕ ಮತ್ತು ಭಾವಶೂನ್ಯ ಕಾರ್ಯವಾಗಲ್ಲ.
ನಿಮ್ಮದೇ ತಲೆಯೊಳಗೆ ನೀವು ಹುಟ್ಟುಹಾಕುವ ಅಸಂಬದ್ಧಕ್ಕಿಂತ ಸೃಷ್ಟಿಕರ್ತನ ಸೃಷ್ಟಿಗೆ ಗಮನ ನೀಡುವುದು ಹೆಚ್ಚು ಮುಖ್ಯ.
ಅತೀಂದ್ರಿಯಜ್ಞಾನ ಎಂದರೆ ಪವಾಡಗಳನ್ನು ಮಾಡುವುದಲ್ಲ, ಬದಲಿಗೆ ಜೀವನವೆಂಬ ಪವಾಡದ ಗಹನವಾದ ಪರಿಶೋಧನೆ. ಅದು ಪಂಚೇಂದ್ರಿಯಗಳ ಗ್ರಹಿಕೆಯನ್ನು ಮೀರಿದ್ದು.
ನೀವು ಜೀವನವನ್ನು ಒಂದು ಸಾಧ್ಯತೆಯಾಗಿ ನೋಡುತ್ತಿದ್ದರೆ, ನಿಮಗೆ ಎಲ್ಲೆಡೆ ಸಾಧ್ಯತೆಗಳೇ ಕಾಣುತ್ತವೆ. ನೀವು ಜೀವನವನ್ನು ಒಂದು ಸಮಸ್ಯೆಯಾಗಿ ನೋಡುತ್ತಿದ್ದರೆ, ನಿಮಗೆ ಎಲ್ಲೆಡೆ ಸಮಸ್ಯೆಗಳೇ ಕಾಣುತ್ತವೆ.
ಸಮಸ್ತ ಬ್ರಹ್ಮಾಂಡವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ನಿಮ್ಮ ಯೋಚನೆಗಳಿಗೆ ಏನೂ ಅರ್ಥವಿಲ್ಲ. ಇದು ನಿಮಗೆ ಮನವರಿಕೆಯಾದರೆ, ನೀವು ಸಹಜವಾಗಿಯೇ ನಿಮ್ಮ ಯೋಚನಾ ಪ್ರಕ್ರಿಯೆಯಿಂದ ಅಂತರವನ್ನು ಉಂಟುಮಾಡಿಕೊಳ್ಳುತ್ತೀರಿ.
ನೀವು ಚಿಂತೆಯಿಂದ ಕೂಡಿದ್ದ ಸಮಯಕ್ಕೆ ಹೋಲಿಸಿದರೆ, ನೀವು ಲವಲವಿಕೆ, ಸಂತೋಷದಿಂದ ಪುಟಿಯುತ್ತಿದ್ದಾಗ ನಿಮ್ಮ ರೋಗನಿರೋಧಕ ಶಕ್ತಿಯು ಎಷ್ಟೋ ಉತ್ತಮವಾಗಿ ಕಾರ್ಯಗೈಯುತ್ತದೆ. ಜೀವನದ ಸ್ವರೂಪದಲ್ಲಿ ನೆಲೆಗೊಳ್ಳುವುದೇ ಸ್ವಾಸ್ಥ್ಯ.
ನಿಮ್ಮ ಬದುಕಿನಲ್ಲಿ, ವಿಶೇಷವಾಗಿ ಅಹಿತವಾದ ಸಂಗತಿಗಳು ನಡೆದಿದ್ದರೆ, ನೀವು ವಿವೇಕಿಗಳಾಗಬೇಕೇ ಹೊರತು ಘಾಸಿಗೊಳಗಾಗಬಾರದು.
ಬುದ್ಧಿವಂತ ವ್ಯಕ್ತಿಗೆ ತಾನು ಮೂರ್ಖ ಎಂದು ತಿಳಿದಿದೆ, ಆದರೆ ಒಬ್ಬ ಮೂರ್ಖನಿಗೆ ತಾನು ಮೂರ್ಖನೆಂದು ತಿಳಿದಿಲ್ಲ.
ಪ್ರೀತಿ ಎಂಬುದು ಒಂದು ವಿನಿಮಯವಲ್ಲ, ಬದಲಿಗೆ ನಿಮ್ಮೊಳಗೆ ಉರಿಯುವ ಒಂದು ಜ್ವಾಲೆ. ನೀವು ‘ನಾನು’ ಅಂದುಕೊಂಡಿರುವುದರ ಮೂಲವನ್ನೇ ಅದು ದಹಿಸಿಬಿಟ್ಟಾಗ, ಅದು ನಿಮ್ಮನ್ನು ಮುಕ್ತಗೊಳಿಸುತ್ತದೆ.
ಸತ್ಯನಿಷ್ಠತೆ ಎಂಬುದು ನೀವೇನು ಮಾಡುತ್ತೀರಿ ಎಂಬುದರ ಬಗ್ಗೆಯಾಗಿಲ್ಲ, ಬದಲಿಗೆ ಅದರ ಹಿಂದಿನ ಉದ್ದೇಶದ ಬಗ್ಗೆಯಾಗಿದೆ. ನೀವು ಅದನ್ನು ಲೋಕ ಕಲ್ಯಾಣಕ್ಕಾಗಿ ಮಾಡುತ್ತಿದ್ದೀರೋ ಅಥವಾ ನಿಮ್ಮ ವೈಯಕ್ತಿಕ ಲಾಭಕ್ಕಾಗಿಯೋ ಎಂಬುದೇ ಪ್ರಶ್ನೆ.
ನೀವು ಈ ಮನಸ್ಸನ್ನು ಬಳಸಿಕೊಂಡು ನಿಮಗಾಗಿ ಒಳಿತನ್ನು ಉಂಟುಮಾಡಿಕೊಳ್ಳಬಹುದು ಅಥವಾ ತೊಳಲಾಟವನ್ನು ಉಂಟುಮಾಡಿಕೊಳ್ಳಬಹುದು. ಈ ಆಯ್ಕೆ ಎಲ್ಲರ ಬಳಿಯಲ್ಲೂ ಇದೆ.
ಮನುಷ್ಯರು ಪ್ರಜ್ಞಾಪೂರ್ವಕರಾದರೆ ಅಧಿಕಾರ ಮೆರೆಯುವ ಮತ್ತು ಘರ್ಷಣೆಯಲ್ಲಿ ತೊಡಗುವ ಗೀಳು ಕಣ್ಮರೆಯಾಗುತ್ತದೆ.