Main Centers
International Centers
India
USA
Sadhguru Quotes
FILTERS:
SORT BY:
Clear All
ಸತ್ಯವು ಅವಿತುಕೊಂಡಿಲ್ಲ. ನೀವು ಅದರಿಂದ ಅವಿತುಕೊಳ್ಳುತ್ತಿದ್ದೀರಿ ಅಷ್ಟೆ.
ನೀವು ನಶ್ವರರು ಎಂಬ ಪರಿಜ್ಞಾನ ಇಲ್ಲದಿರುವುದೇ ಅತ್ಯಂತ ದೊಡ್ಡ ಅಜ್ಞಾನ.
ಪ್ರೀತಿ, ಆನಂದ, ಮತ್ತು ಭಾವಪರವಶತೆಯ ಕಣ್ಣೀರು ನಿಮ್ಮ ಕೆನ್ನೆಗಳನ್ನು ತೋಯಿಸಿಲ್ಲವಾದರೆ, ನೀವಿನ್ನೂ ಜೀವನವನ್ನು ಸವಿದಿಲ್ಲ.
ಧ್ಯಾನಲಿಂಗವು ದೈವಿಕತೆಯ ಅತ್ಯುನ್ನತ ಸಾಕಾರರೂಪ. ಅದರ ಪರಿಧಿಯೊಳಗೆ ಬಂದ ಯಾರೇ ಆದರೂ ತಮ್ಮೊಳಗೆ ಪರಮಮುಕ್ತಿಯ ಆಧ್ಯಾತ್ಮಿಕ ಬೀಜವು ಬಿತ್ತಲ್ಪಡುವುದನ್ನು ತಪ್ಪಿಸಿಕೊಳ್ಳಲಾರರು.
ನಿಮಗೆ ನಿಮ್ಮ ಸಂಬಂಧಗಳು ಚೆನ್ನಾಗಿರಬೇಕೆಂದರೆ, ನಿಮಗಿಂತ ಆ ಇನ್ನೊಬ್ಬರು ಹೆಚ್ಚು ಮುಖ್ಯವಾದವರು ಎಂದು ನಿಮಗೆ ನೀವೇ ನಿರಂತರವಾಗಿ ನೆನಪಿಸಿಕೊಳ್ಳುತ್ತಿರಿ.
ಬದುಕಿನಲ್ಲಿ ‘ಸರಿಯಾದ ನಿರ್ಧಾರ’ ಎನ್ನುವಂತದ್ದಿಲ್ಲ. ನೀವು ಒಂದು ನಿರ್ಧಾರವನ್ನು ತೆಗೆದುಕೊಂಡು ನಿಮ್ಮ ಜೀವವನ್ನೇ ಅದರಲ್ಲಿ ಹೂಡಿದರೆ, ಅದೊಂದು ಅದ್ಭುತವಾಗಿ ರೂಪುಗೊಳ್ಳುತ್ತದೆ.
ಸಂಕಲ್ಪ ಒಂದು ವಿಷಯವಾದರೆ, ಕಾರ್ಯರೂಪಕ್ಕೆ ತರುವುದು ಇನ್ನೊಂದು ವಿಷಯ. ನಿಮ್ಮ ಬದುಕಿನಲ್ಲಿ ನೀವು ಸಂಕಲ್ಪಿಸಿರುವುದನ್ನು ಕಾರ್ಯರೂಪಕ್ಕೆ ತರುತ್ತೀರೋ, ಅಥವಾ ನಿಮ್ಮ ಬದುಕು ಆಕಸ್ಮಿಕವಾಗಿ ನಡೆಯಲು ಬಿಡುತ್ತೀರೋ – ಇದೇ ಮೂಲ ಪ್ರಶ್ನೆ.
ಅಸ್ತಿತ್ವವು ಒಂದು ಅಖಂಡವಾದ ವಿದ್ಯಮಾನ. ನೀವು ಒಂದು ಪ್ರತ್ಯೇಕ ಘಟಕವೇನಲ್ಲ.
ನಿಮ್ಮ ಕೆಲಸಗಳು ‘ಕಷ್ಟಪಟ್ಟು’ ಮಾಡಿದ ಕೆಲಸಗಳಾಗದೇ ಇರಲಿ, ಬದಲಿಗೆ ಪ್ರೀತಿ ಮತ್ತು ಸಂತೋಷದಿಂದ ಮಾಡಿದ್ದಾಗಿರಲಿ.
ಯಾರನ್ನೂ ಮೇಲಾಗಿ ನೋಡಬೇಡಿ. ಯಾರನ್ನೂ ಕೀಳಾಗಿಯೂ ನೋಡಬೇಡಿ. ಎಲ್ಲರನ್ನೂ ನೀವು ಅವರು ಇರುವಂತೆಯೇ ನೋಡಿದಾಗ, ಜೀವನದ ಮೂಲಕ ಪರಿಣಾಮಕಾರಿಯಾಗಿ ಸಾಗುತ್ತೀರಿ.
ಬ್ರಹ್ಮಾಂಡದ ಪರಿಮಾಣದೆದುರು ನೀವು ಯಾರು ಎಂದು ನಿಮಗೆ ಮನವರಿಕೆಯಾದರೆ, ನೀವು ನಮ್ರತೆಯಿಂದ ಬಾಳುತ್ತೀರಿ. ಆಗ ನೀವು ಸ್ಪರ್ಶಿಸುವ ಎಲ್ಲವೂ ಅನುಗ್ರಹಪೂರಿತವಾಗುತ್ತದೆ.
ವೈರಾಗ್ಯ ಎಂದರೆ ತೊಡಗುವಿಕೆಯೇ ಇಲ್ಲದಿರುವುದಲ್ಲ. ನೀವು ಜೀವನದಲ್ಲಿ ಆಳವಾಗಿ ತೊಡಗಬಹುದು, ಆದರೆ ಅದರಲ್ಲಿ ತೊಡರಿಕೊಳ್ಳದೇ ಇರಬಹುದು.